Wednesday, November 18, 2009

ಕನ್ನಡ ಮತ್ತು ಎನ್ನಡ

ಕನ್ನಡ ಸಂಘವೊಂದು ಕನ್ನಡ ಮಾತನಾಡದ ರೆಡಿಯೋ ಸ್ಟೇಷನ್ ಮೇಲೆ ದಾಳಿ ಮಾಡಿದ ಸುದ್ದಿ ಪೇಪರಿನಲ್ಲಿತ್ತು. "ಏನು ಮೂರ್ಖತನ ನೋಡು. ಜನ ಬೇಕಾದ್ದು ಕೇಳುತ್ತಾರೆ, ಹೀಗ್ಯಾಕೆ ಇವರು ಕಂಡವರ ಮೇಲೆಲ್ಲ ಹರಿಹಾಯುತ್ತಾರೆ? cheap ರಾಜಕೀಯ", ಇಂಗ್ಲೀಷಿನಲ್ಲಿ ಹೇಳಿದಳು.

Monday, November 9, 2009

ಶಾಂತಾರಾಂ ಮತ್ತು ಅಲಾರಾಂ

ಶಾಂತಾರಾಮನಿಗೆ ಇತ್ತಿತ್ತಲಾಗಿ ಒಂದು ಕಿವಿ ಕೇಳಿಸುತ್ತಿಲ್ಲ.

ಬೆಳಗಿನ ಜಾವ ಐದು ಘಂಟೆಗೆ ಸರಿಯಾಗಿ ಅಲಾರಾಂ ಕಿರುಚತೊಡಗಿತು. ಯಾವತ್ತೂ ಅಷ್ಟು ಬೇಗ ಎದ್ದಿರದ ಶಾಂತಾರಾಮನಿಗೆ ತಾನು ಯಾರು ಎನ್ನುವುದು ಗೊತ್ತಾಗಲು ಐದು ಸೆಕೆಂಡೂ, ತಾನೆಲ್ಲಿದ್ದೇನೆ ಎಂದು ಗೊತ್ತಾಗಲು ಮತ್ತೈದು ಸೆಕೆಂಡೂ, ಈಗ ಕಿರುಚುತ್ತಿರುವುದು ಅಲಾರಾಂ ಎಂದು ಗೊತ್ತಾಗಲು ಇನ್ನೆರಡು ಸೆಕೆಂಡೂ ಹಿಡಿಯಿತು. ಮತ್ತೆರಡು ಸೆಕೆಂಡುಗಳಲ್ಲಿ ಅಲಾರಾಮಿನ ಬಾಯಿ ಮುಚ್ಚಿಸದಿದ್ದರೆ ಪಕ್ಕದ ರೂಮಿನಲ್ಲಿ ರಾತ್ರಿ ಲೇಟಾಗಿ ಮಲಗಿರುವ ರತ್ನಮಾಲ ಎದ್ದು ಬಂದು ಕೆಂಡ ಕಾರುತ್ತಾಳೆಂಬ ಎಚ್ಚರ ಆ ನಿದ್ದೆಗಣ್ಣಿನಲ್ಲೂ ಶಾಂತಾರಾಮನಿಗೆ ಉಂಟಾಯಿತು. ರತ್ನಮಾಲಾ ಅವನ ಹೆಂಡತಿ. ಶಾಂತಾರಾಮನ ಗೊರಕೆಯಿಂದಾಗಿ ರತ್ನಮಾಲಾಳೂ, ರತ್ನಮಾಲಾಳ ಬೈಗುಳದಿಂದಾಗಿ ಶಾಂತಾರಾಮನೂ ಬೇರೆ ಬೇರೆ ರೂಮಿನಲ್ಲಿ ಮಲಗುತ್ತಾರೆ. ಶಾಂತಾರಾಮ ಮಲಗಿದಲ್ಲಿಂದಲೇ ಅಲಾರಾಮಿನ ತಲೆಯ ಮೇಲೆ ಬಡಿದ. ಅಲಾರಾಂ ಬಾಯಿ ಮುಚ್ಚಲಿಲ್ಲ!

Tuesday, November 3, 2009

ಚಕ್ರದಿಂದ ಚಕ್ರಕ್ಕೆ...

ಬಸ್ಸಲ್ಲಿ ಓಡಾಡುವುದು ಮಹಾಕಷ್ಟ ಎಂದು ಗೊತ್ತಾದದ್ದು ಮೂರು ತಿಂಗಳ ಸಂಬಳ ಬಂದು ಹಳೆಯ ಸಾಲವೆಲ್ಲ ತೀರಿ, ಬ್ಯಾಂಕಿನಲ್ಲಿ ಶೇಖರಕೊಂಡ ಇಪ್ಪತ್ತು ಸಾವಿರ ರೂಪಾಯಿ ಕಣ್ಣು ಕುಕ್ಕತೊಡಗಿದಾಗ! ತಡವೇಕೆ ಎಂದು ಅದೇ ತಿಂಗಳು ಒಂದು ಬೈಕ್ ಕೊಂಡುಕೊಂಡೆ. ಉಳಿದ ದುಡ್ಡಿಗೆ ಬ್ಯಾಂಕುಗಳಿದ್ದಾವಲ್ಲ. ಅವರಿರುವುದೇತಕ್ಕೆ?

ನನ್ನದು ಸಖ್ಖತ್ ಲೇಟೆಸ್ಟ್ ಬೈಕು. ಥೇಟ್ ಕಾರಿನಲ್ಲಿ ಕೂತಂತೆಯೇ ಅನಿಸುತ್ತದೆ(ನಾನ್ಯಾವತ್ತೂ ಕಾರಿನಲ್ಲಿ ಕೂತಿಲ್ಲ, ಇದು ಹಾಗೆಂದು ನನ್ನ ಸ್ನೇಹಿತರು ಹೇಳುವುದನ್ನು ಕೇಳಿದ್ದೇನೆ). ಕಾರಿನಲ್ಲಿ ಕೂತಂತೆಯೇ ಅನಿಸುತ್ತದೆಂದು ನನ್ನ ಕೆಲವು ಸ್ನೇಹಿತರಿಗೂ ನಾನೇ ಹೇಳಿದೆ.

Saturday, September 5, 2009

ಗಿಳಿಯು ಪಂಜರದೊಳಿಲ್ಲ !

ಆಘಾತಗಳೆಲ್ಲವೂ ಯಾಕೆ ಅನಿರೀಕ್ಷಿತವಾಗಿರುತ್ತವೋ? ಅನಿರೀಕ್ಷಿತವಾಗಿರದಿದ್ದರೆ ಅದನ್ನು ಆಘಾತ ಎನ್ನುವುದಿಲ್ಲವೇ? ಅಂತೂ ಅವತ್ತಿನ ಮಟ್ಟಿಗೆ ನನ್ನ ಗ್ರಹಚಾರ ಸರಿ ಇರಲಿಲ್ಲ.

ಬೇಸಿಗೆಯಲ್ಲಿ ಮಧ್ಯಾಹ್ನ ಮಾತ್ರ ಬಿಸಿಲು ಬೀಳುವ, ಮಳೆಗಾಲದಲ್ಲಿ ಒಂದು ಕ್ಷಣವೂ ಮಳೆ ನಿಲ್ಲದ, ಅಚ್ಚ ಹಸಿರಿನ ಬೆಟ್ಟಗಳ ನಡುವಿನ ಹಳ್ಳಿ ನಮ್ಮದು. ವರ್ಷದಲ್ಲಿ ಹೆಚ್ಚಿನ ಕಾಲ ಬೆಳಿಗ್ಗೆ ಹತ್ತು ಘಂಟೆಯವರಿಗೂ ಮಂಜು ಮುಸುಕಿರುತ್ತದೆ. ಅಡಿಗೆಗೆ ಗೋಬರ್ ಗ್ಯಾಸ್ ಬಳಸುವಷ್ಟು ಮುಂದುವರಿದ, ಆದರೆ ಸ್ನಾನದ ಒಲೆಗೆ ಇನ್ನೂ ಉರುವಲನ್ನೇ ಬಳಸುವಷ್ಟು ಹಿಂದುಳಿದಿರುವ ಊರು. ಅಚ್ಚ ಹಸಿರಿನ ಹಿನ್ನೆಲೆಗೆ, ತೆಳ್ಳಗೆ ಮುಸುಕಿದ ಮಂಜಿನ ಮಧ್ಯೆ, ಉರುವಲಿನಿಂದ ಏಳುವ ನೀಲಿ ಹೊಗೆ ಸೇರಿ ಪ್ರತಿ ಮುಂಜಾನೆ ಒಂದು ಅದ್ಭುತ ದೃಶ್ಯ ಸೃಷ್ಟಿಯಾಗುತ್ತದೆ. ಊರಿನ ಹಿಂದೆ ಒಂದು ಮೈಲಿ ದೂರದಲ್ಲಿ ಬಸ್ಸಿನ ರಸ್ತೆಯೂ, ಊರಿನ ಮುಂದೆ ಒಂದು ಮೈಲಿ ದೂರದಲ್ಲಿ ರೈಲ್ವೆ ಹಳಿಯೂ, ನಿಲ್ದಾಣವೂ ಇದೆ. ಇರುವ ಹತ್ತೇ ಮನೆಗಳಲ್ಲಿ ಇಪ್ಪತ್ತು ಕಾದಂಬರಿಗಳಿಗಾಗುವಷ್ಟು ತರಹೇವಾರಿ ಪಾತ್ರಗಳಿವೆ.

Monday, August 24, 2009

ನೀ ಮಾಯೆಯೋ, ನಿನ್ನೊಳು ಮಾಯೆಯೋ !

ಸೀತಾಪತಿ ಹಗಲುಕನಸುಗಾರ. ಕನಸನ್ನು ಅದೆಷ್ಟು ತನ್ಮಯತೆದಿಂದ ಅನುಭವಿಸುತ್ತಾನೆಂದರೆ, ಕನಸು ಕಾಣುತ್ತಿರುವಷ್ಟು ಹೊತ್ತು ಅದು ಕನಸೆಂದೇ ಅವನಿಗೆ ಅನ್ನಿಸುವುದಿಲ್ಲ. ಯಾವ ಕನಸೂ ನಿಜವಾಗಲೆಂದು ಅವನು ಬಯಸಿಲ್ಲ. ಹೇಗಿದ್ದರೂ ಅವು ನಿಜವಾಗುವಂಥ ಕನಸುಗಳೇ ಅಲ್ಲವಲ್ಲ !